Tuesday, October 6, 2015

Gud morning

ಶುಭಬೆಳಗು, ಗೆಳೆಯರೇ, ಇಂದಿನ ವಿಜಯವಾಣಿ ದಿನಪತ್ರಿಕೆಯ ಶುಭನುಡಿ "ಸಂಬಂಧಗಳು ವಿದ್ಯುತ್ ಸಂಪರ್ಕದಂತೆ, ಹೆಚ್ಚು ಕಡಿಮೆ ಆದರೆ ಅಪಘಾತ, ಸರಿಯಿದ್ದರೆ ಬೆಳಕು. ಸದಾ ಸಂಪರ್ಕ ಸರಿಯಿರಲಿ." ಸೂಪರ್ ಅಲ್ವಾ, ಸಂಬಂಧಗಳು ಸೂಕ್ಷ್ಮ ಅವುಗಳ ನಿರ್ವಹಣೆ ಇನ್ನೂ ಸೂಕ್ಷ್ಮವಾಗಿರಲೇಬೇಕು. ಜೋರಾಗಿ ಎಳೆದರೆ ಅರಿಯುತ್ತದೆ ಪೂರ್ತಿ ಬಿಟ್ಟುಬಿಟ್ಟರೆ ದಾರಿ ತಪ್ಪುತ್ತದೆ. ಸಂಬಂಧ ಎನ್ನುವುದು ಕೇವಲ ಗಂಡ ಹೆಂಡತಿಯ ನಡುವಿರುವುದು ಎಂದು ಮಾತ್ರ ತಿಳಿಯುವಂತಿಲ್ಲ.  ಮಕ್ಕಳು-ತಂದೆ,ತಾಯಿ, ಮಕ್ಕಳು - ಮನೆಯಲ್ಲಿರುವ ಹಿರಿಯರು. ವಿದ್ಯಾರ್ಥಿ-ಶಿಕ್ಷಕ/ಕಿ, ಗೆಳೆಯರು,ಗೆಳತಿಯರು,ಪ್ರೇಮಿಗಳು, ಅಧಿಕಾರಿಗಳು ಹೀಗೆ ಹೇಳುತ್ತಾ ಹೋದರೆ ಬಹಳಷ್ಟು ಬಹಳಷ್ಟು ಇವೆ. ಸರಿ ಯಾವುದೇ ಸಂಬಂಧವಾದರೂ ಒಂದು ಸಮತೋಲನದ ಮೇಲೆ ನಿಂತಿರುತ್ತದೆ. ಸಮತೋಲನ ತಪ್ಪಿತೋ ಸಂಬಂಧ ಕೆಟ್ಟಿತೆಂದೇ ಅರ್ಥ. ಒಡೆದು ಹೋದ ಕನ್ನಡಿಯನ್ನು ಬೇಕಾದರೆ ಒಂದು ಮಾಡಬಹುದು(ಕತ್ತರಿಸಿ ಹೋದ ರುಂಡವನ್ನೇ ಮತ್ತೆ ಜೋಡಿಸಿ ಜೀವ ಕೊಟ್ಟ ಉದಾಹರಣೆ ಇಂದಿನ ಪತ್ರಿಕೆಯಲ್ಲಿದೆ , ನಮ್ಮ ವಿಜ್ಞಾನ ಜಗತ್ತಿಗೆ ಒಡೆದ ಕನ್ನಡಿ ಜೋಡಿಸುವುದೇನು ಕಷ್ಟವಲ್ಲ ಬಿಡಿ) ಆದರೆ ಒಡೆದ ಸಂಬಂಧ ಜೋಡಿಸಲಾಗದು. ಒಂದು ವೇಳೆ ಕೂಡಿಸಿದರು ಅದು ಮೊದಲಿನಂತಿರದು. ಸಂಬಂಧ ಕೆಡಲು, ಹಾಳಾಗಲು ಹಲವು ಕಾರಣಗಳಿರಬಹುದು. ನಾನೇ ಗ್ರೇಟ್ ಅನ್ನೋ ಈಗೋ ಬಂದರೆ,  ನಾ ಹೇಳಿದ್ದನ್ನೇ ಕೇಳಬೇಕು ಎಂಬ ಸೂಪರ್ ಈಗೋ ನಮ್ಮಲ್ಲಿ ಹರಿದಾಡಿದರೆ, ಮಾತು ಎಲ್ಲೆ ಮೀರಿ ಹರಿದಾಡಿದರೆ, ಒಬ್ಬರು ಇನ್ನೊಬ್ಬರನ್ನು ತಮ್ಮ ಹಿಂಬಾಲಕರಂತೆ ಕಂಡರೆ, ಜೊತೆಯಲ್ಲಿದ್ದುಕೊಂಡೆ ಭಾವನೆಗಳ ಹಂಚಿಕೆಯಾಗದಿದ್ದರೆ, ನಂಬಿಕೆಗಳು ಅರ್ಥಕಳೆದುಕೊಂಡರೆ ಹೀಗೆ ಇನ್ನೂ ಏನೇನೋ ಆಗಿ ಸಂಬಂಧ ಹದಗೆಟ್ಟಾಗ ಅದರ ರಿಪೇರಿ ಮಾಡುವ ಕೆಲಸವಿದೆಯಲ್ಲ ಅದು ಯಾವ ಮೆಕ್ಯಾನಿಕ್ ನಿಗೂ ಸಾಧ್ಯವಾಗದ ಮಾತು. ಅದಕ್ಕೆ ಹಳಸುವ ಮೊದಲೇ ಸಂಬಂಧವನ್ನು ಉಣ್ಣಬೇಕಾದ ಅಗತ್ಯತೆ ಇದೆ. ಕಡಿದುಹೋಗುವ ಮೊದಲೇ ಸಂಬಂಧ ಉಳಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ. ಸತ್ತು ಹೋಗುವ ಮೊದಲೇ ನನ್ನ ಪ್ರೀತಿಯ ತೋಡಿಕೊಳ್ಳಬೇಕಿದೆ, ಸಂಬಂಧ ಮುದುಡುವ ಮೊದಲೇ ನನ್ನ ಈಗೋ/ಸೂಪರ್ ಇಗೋ ಹೊರಹೋಗಬೇಕಿದೆ. ಸಂಬಂಧ ಶಾಶ್ವತ ಅದಕ್ಕೆ ಬುನಾದಿ ಅವಶ್ಯಕ. ಶುಭೋದಯ.

No comments:

Post a Comment

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23 :   ತರಗತಿ ಕನ್ನಡ ಇಂಗ್ಲೀಷ್ ಹಿಂದಿ ಗಣಿತ ವಿಜ್ಞಾನ ಸಮಾಜ ವಿಜ್ಞಾನ...