Thursday, September 17, 2015

ಚಿಂತನೆ

ಮಲ್ಗೋಕ್ ಮುಂಚೆ, ಗೆಳೆಯರೆ, "ನಿರ್ದಿಷ್ಟ ಕಾಲದಲ್ಲಿ ನಿರ್ದಿಷ್ಟ ಕಾರ್ಯವನ್ನು ಮಾಡುವ ಅಭ್ಯಾಸವಿದ್ದರೆ, ಈಗೇನು ಮಾಡಲಿ, ಇನ್ನೇನು ಮಾಡಲಿ ಎಂದು ತಲೆ ಕೆರೆದುಕೊಳ್ಳುವುದು ತಪ್ಪುತ್ತದೆ ಹಾಗೂ ಸಮಯ ಉಳಿಯುತ್ತದೆ." ನಿಜಾ ಅಲ್ವಾ? ನಮ್ಮ.ಯಾವುದೇ ಕೆಲಸವನ್ನು ಒಂದು ಯೋಜನೆ ಹಾಕಿಕೊಂಡು ಸಮಯಕ್ಕೆ ತಕ್ಕಂತೆ ಅವನ್ನು ಮುಗಿಸಿದರೆ ಬೇರೆ ಯಾರ ಮುಂದೆಯೂ ತಲೆ ಕೆರೆದುಕೊಳ್ಳುವ ಅವಶ್ಯಕತೆ ಇಲ್ಲಾ, ಅದಕ್ಕೆ ಡಾ//ಎಂ ವಿಶ್ವೇಶ್ವರಯ್ಯನವರು ಹೇಳುತ್ತಾರೆ,plan or perish. (ಯೋಜಿಸಿ ಇಲ್ಲವೇ ನಾಶವಾಗಿ )ಎಂದು. ಒಂದು ಕೆಲಸವನ್ನು ಒಪ್ಪಿಕೊಂಡಮೇಲೆ ಆ ಕೆಲಸವನ್ನು ನಿಷ್ಠೆಯಿಂದ ಮಾಡಿ ಮುಗಿಸಬೇಕಾದದ್ದು ನಮ್ಮ ಜವಾಬ್ದಾರಿ. ಅದು ನನ್ನ ಸಾಮರ್ಥ್ಯಕ್ಕೆ ಮೀರಿದ್ದು ಎಂದು ಮೊದಲೇ ಅನಿಸಿದರೆ ಆ ಕೆಲಸವನ್ನು ಒಪ್ಪಲೇ ಬಾರದು, ಅದಕ್ಕೆ ಯಾವುದೇ ಕೆಲಸ ಹಾಗೂ ಜವಾಬ್ದಾರಿಯಾಗಲಿ ಮೊದಲೆ ತಿಳಿದುಕೊಂಡು ಅದರ ಬಗೆಗಿನ ಪೂರ್ವಾಪರಗಳನ್ನು ಅರಿತು ಒಪ್ಪಿಕೊಳ್ಳಬೇಕು.ಅದು ಬಿಟ್ಟು ಒಪ್ಪಿಕೊಂಡ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸದಿದ್ದರೆ , ಸಿಕ್ಕವರ ಮುಂದೆಲ್ಲಾ ಅಸಹಾಯಕರಾಗಿ ತಲೆ ಕೆರೆದುಕೊಳ್ಳುತ್ತಾ ನಿಲ್ಲಬೇಕಾಗುತ್ತದೆ. ನಮ್ಮ ಕೆಲಸವನ್ನು ನಾವು ಅಸಡ್ಡೆಯಿಂದ ನೋಡಿದರೆ,ಜಗತ್ತು ನಮ್ಮನ್ನು ಅಸಡ್ಡೆಯಿಂದ ಅನಾದರದಿಂದ ನೋಡಿ ಗೇಲಿಮಾಡುತ್ತದೆ. ನಮ್ಮ ಕೆಲಸವನ್ನು ನಾವು ಗೌರವಿಸಿ, ಭಕ್ತಿಯಿಂದ, ಪ್ರೀತಿಯಿಂದ ಮಾಡಿದರೆ ಜನರು ನಮ್ಮನ್ನು ಮೆಚ್ಚದಿದ್ದರೂ ಬೇಕಾಗಿಲ್ಲ ಕೊನೆಪಕ್ಷ ನಮ್ಮ ಆತ್ಮಸಾಕ್ಷಿ ಮೆಚ್ಚಿ ಒಪ್ಪಿದರೆ ಸಾಕು, ನಾವು ಯಾರಿಗೆ ಬೇಕಾದರೂ ಮೋಸ ಮಾಡಬಹುದು ಆದರೆ ನಮ್ಮ ಮನಸಾಕ್ಷಿಗೆ? ನೋ ಚಾನ್ಸ್. ನಮ್ಮ ವೃತ್ತಿಯನ್ನು ಪ್ರೀತಿಸೋಣ, ಗೌರವಿಸೋಣ, ಅಂದುಕೊಂಡ ಕೆಲಸವನ್ನು ಅಂದೇ ಮಾಡಿ ಮುಗಿಸೋಣ, ಶುಭರಾತ್ರಿ.

No comments:

Post a Comment

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23 :   ತರಗತಿ ಕನ್ನಡ ಇಂಗ್ಲೀಷ್ ಹಿಂದಿ ಗಣಿತ ವಿಜ್ಞಾನ ಸಮಾಜ ವಿಜ್ಞಾನ...