Thursday, September 17, 2015

ಚಿಂತನೆ

ಶುಭಬೆಳಗು, ಗೆಳೆಯರೇ, ಮನುಷ್ಯ ಬದುಕಬೇಕು, ಅದಕ್ಕಾಗಿ ಆಶೆಗಳು ಬೇಕು. ಆಶೆ ಎಂಬುದಿಲ್ಲದಿದ್ದರೆ ನಮ್ಮ ಎಲ್ಲ ಕೆಲಸಗಳೂ ಸ್ಥಗಿತವಾಗುತ್ತಿದ್ದವೇನೋ, ಯಾಕೆಂದರೆ ಏನು ಬೇಡ ಎಂಬ ಮನಸ್ಸು ಏನನ್ನೂ ಮಾಡದು. ಆದರೆ ಅತಿಯಾಶೆ ಒಳ್ಳೆಯದಲ್ಲ. ಅತಿಯಾಶೆಯಿಂದ ದುಖಃ ಸಹಜ. ಎಲ್ಲವೂ ಬೇಕೆಂಬ ಭಾವನೆ ಹೊಂದಿದಾಗ, ಅಥವಾ ನನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನದನ್ನು ಬಯಸಿದಾಗ ಅದು ದೊರಯುವುದು ಕಷ್ಟ, ಆಗ ನಮ್ಮ ಮನಸ್ಸು ಅಶಾಂತವಾಗುತ್ತದೆ. ಅಶಾಂತವಾದ ಮನಸ್ಸು ಏನಾದರೂ ಮಡಲು ಸಿದ್ಧವಾಗುತ್ತದೆ. ಅಶಾಂತ ಮನಸ್ಸಿನಿಂದ ಅಪ್ರಯೋಜಕ, ಅನಾಹುತಕಾರಿ ಸಂಗತಿಗಳುಂಟಾಗುತ್ತವೆ. ಅವು ಬೇರೆಯವರಿಗೆ ತೊಂದರೆದಾಯಕವಾಗಬಹುದು ಕೆಲವೊಮ್ಮೆ ನಮಗೆ ತೊಂದರೆದಾಯಕವಾಗಬಹುದು. ಯಾರಿಗೆ ತೊಂದರೆಯಾದರೂ ಅದರಿಂದ ದುಖಃ ತಪ್ಪಿದ್ದಲ್ಲ. ಆಶೆಯ ದುಖಃಕ್ಕೆ ಕಾರಣ ಎಂದು ಬುದ್ಧ ಹೇಳಿದ್ದು. "ಎಲ್ಲ ಆಶೆಯ ಬಿಟ್ಟರಿಲ್ಲಿಯೇ ಕೈಲಾಸ, ಎಲ್ಲವನು ಬಯಸಿ ಭ್ರಮಿಸಲು ನರಕತಾನಿಲ್ಲಿಯೇ ನೋಡು ಸರ್ವಜ್ಞ"ಎಂಬ ಸರ್ವಜ್ಞರ ವಚನವಿದೆ. ಇದರರ್ಥ,  ಈ ಭೂಮಿಯ ಮೇಲೆ ಎಲ್ಲ ವಿಷಯಗಳ ಮೇಲಿನ ಆಶೆಯನ್ನು ಬಿಟ್ಟು ಬಿಟ್ಟರೆ ಇಲ್ಲಿಯೇ ಅಂದರೆ ನಾವಿರುವಲ್ಲಿಯೇ ಸ್ವರ್ಗವಿದೆ. ಆದರೆ ಸಕಲ ವಿಷಯಗಳನ್ನು ಅಪೇಕ್ಷಿಸುವ ಅವುಗಳ ಪ್ರಪ್ತಿಗಾಗಿ ದೇಶವನ್ನೆಲ್ಲ ತಿರುಗಹತ್ತಿದರೆ ಆಗ ನರಕವೂ ಇಲ್ಲಿಯೇ ಇರುವುದೆಂದು ತಿಳಿಯಬೇಕು. ಹೌದಲ್ಲವೇ? ಯಾವಾಗ ನಮ್ಮ ಆಶೆ ಈಡೆರುವುದಿಲ್ಲವೋ ಆಗ ಮನಸ್ಸು ದುರ್ಬಲವಾಗಿ,  ಖಿನ್ನವಾಗಿ ಬಿಡುತ್ತದೆ. ಮನಸ್ಸು ಪ್ರಭಲವಾಗಿರುವುದು ಅಗತ್ಯ,  ಅದಕ್ಕಾಗಿ ಆಶೆಗಳಿಗೆ ನಿಯಂತ್ರಣ ಬೇಕು. ಶುಭೋದಯ.

No comments:

Post a Comment

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23 :   ತರಗತಿ ಕನ್ನಡ ಇಂಗ್ಲೀಷ್ ಹಿಂದಿ ಗಣಿತ ವಿಜ್ಞಾನ ಸಮಾಜ ವಿಜ್ಞಾನ...