Thursday, September 17, 2015

ಚಿಂತನೆ

ದಿನಕ್ಕೊಂದು ಮಾತು
ಆತ್ಮೀಯರೆ
ನಾವು ಯಾವುದೇ ಮುಖ್ಯವಾದ ಕೆಲಸವನ್ನು ನಿರ್ವಹಿಸುತ್ತಿರುವಾಗ ಆತ್ಮತೃಪ್ತಿ ಇರಬೇಕು ಅಂದಾಗ ಮನಸ್ಸಿಗೆ ನೆಮ್ಮದಿ ಅಲ್ವೇ? ಆದರೆ ನಾವು ಮಾಡುವ ಕೆಲಸವನ್ನು ಕೆಲವೊಮ್ಮೆ ಅನಿವಾರ್ಯ ಬಂದಾಗ ಸಮರ್ಥರಿಗೆ ಸಮರ್ಪಿಸಬೇಕೆ ವಿನಃ ಹೇಡಿಯಾದವನಿಗೆ ಒಪ್ಪಿಸಬಾರದು ಏಕೆಂದರೆ ಹಿಂಜರಿಕೆ,ಆಲಸ್ಯ,ತಾತ್ಸರ ಅವನ ಮನದ ಮನೆಯಲ್ಲಿ ಒಡೆಯರಾಗಿರುತ್ತಾರೆ,ಇದರಿಂದ ಒಪ್ಪಿಸಿದ ಕೆಲವನ್ನು ಕಲಾಸ್ ಮಾಡಿದರು ಮಾಡಬಹುದು.ಇದರಿಂದ ನಿಮ್ಮ ಸ್ಥಾನಮಾನವು ನಶಿಸಬಹುದು.
ಹೇಡಿಗೆ ಹಿರಿತನುವು|ಮೂಢಂಗೆ ಗುರುತನವು
ನಾಡ ನೀಚರಿಗೆ ದೊರೆತನವು|ದೊರೆತಿಹರೆ
ನಾಡೆಲ್ಲ ಕೆಡಗು ಸರ್ಜ್ಞನ|
ಸರ್ವಜ್ಞನ ಮಾತುಗಳನ್ನು ಅರಿತರೆ ಯಾರಿಗೆ,ಯಾವ ಜವಾಬ್ದಾರಿ ನೀಡಬಹುದು ಎನ್ನುವುದು ಮನದಟ್ಟಾಗುತ್ತದೆ. ಜೀವನದಲ್ಲಿ ಯಶಸ್ವಿಯಾಗಬೇಕಾದರೆ "ಗುರು-ಹಿರಿಯರ ಮಾರ್ಗದರ್ಶನ,ಆಶೀರ್ವಾದ ಅವಶ್ಯಬೇಕಾಗುತ್ತದೆ.
"ಹಸಿವಾದಡೆ ಭಿಕ್ಷಾನ್ನಗಳುಂಟು
ತೃಷೆಯಾದರೆ ಕೆರೆ-ಹಳ್ಳಬಾವಿಗಳುಂಟು
ಶಯನಕ್ಕೆ ಹಾಳು ದೇಗುಲಗಳುಂಟು
ಯಶಸ್ವಿ ಹಾದಿಗೆ ಗುರು-ಹಿರಿಯರ ಮಾರ್ಗಗಳುಂಟು." ಎನ್ನುವ ಅನುಭವಿ ಶರಣರ ನೀತಿಯನು ಪಾಲಿಸಿದಾಗ ಯಶ ಕಾಣಲು ಸಾಧ್ಯ. ಆದ್ದರಿಂದ ಯಾವುದೇ ಕೆಲಸ- ಕಾರ್ಯ ಮಾಡುವಾಗ ಯೋಚನೆ-ಯೋಜನೆ,ಇಟ್ಟುಕೊಂಡು ನಡೆದರೆ ಸಾಧನೆ ಮಾರ್ಗದಲ್ಲಿ ಜಯ,ಶ್ರೇಯಸ್ಸು ,ಯಶಸ್ಸು ನಮ್ಮದಾಗಲು ಸಾಧ್ಯ.ಗುರು-ಹಿರಿಯರ ಮಾರ್ಗಪಡೆದು,ಯಶಸ್ವಿ ಹಾದಿಯನ್ನು ತುಳಿಯೋಣ,ಜೀವನದಲ್ಲಿ ಜಯ ಕಾಣೋಣ.
✒ಬಲಭೀಮಸೇನಾಚಾರ್ ಸ.ಶಿ
ಸ.ಮಾ.ಹಿ.ಪ್ರಾ.ಬಾಲಕಿಯರ.ಗಂಗಾವತಿ.

No comments:

Post a Comment

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23 :   ತರಗತಿ ಕನ್ನಡ ಇಂಗ್ಲೀಷ್ ಹಿಂದಿ ಗಣಿತ ವಿಜ್ಞಾನ ಸಮಾಜ ವಿಜ್ಞಾನ...