Thursday, September 17, 2015

ಚಿಂತನೆ

ಮಲ್ಗೋಕ್ ಮುಂಚೆ, ಸ್ನೇಹಿತರೆ, ಸಮಯ ಮತ್ತು ಸಮಯ ಪ್ರಜ್ಞೆ ಹೊಂದಿರುವ ವ್ಯಕ್ತಿ ಜಗತ್ತನ್ನೇ ಗೆಲ್ಲಬಲ್ಲ. ಇಂದು ಈ ಜಗತ್ತಿನಲ್ಲಿ ಹಣ ಹಾಗೂ ಹಣದಿಂದ ಕೊಳ್ಳುವ ವಸ್ತುಗಳಿಗೆ ಮಾತ್ರ ಬೆಲೆ. ಯಾಕೆಂದರೆ ಹಣವೇ ತಾನೇ,  ಸಂಪತ್ತೇ ತಾನೇ, ಪ್ರತಿಷ್ಠೆಯೇ ತಾನೇ ನಮ್ಮೆಲ್ಲರ ಕೊನೆಯ ಗುರಿ. ಆದರೆ ಈ ಹಣಕ್ಕಿಂತ ಮಿಗಿಲಾದದ್ದು ಸಮಯ. ಪ್ರತಿಯೊಬ್ಬ ಮನುಷ್ಯನು ಅನಾಯಾಸವಾಗಿ ಗಳಿಸುವುದು ಈ ೨೪ ಗಂಟೆಗಳ ಸಮಯವನ್ನು, ಮಲಗಿ ಏಳುವದರೊಳಗೆ ೨೪ ಗಂಟೆಗಳನ್ನು ಈತ ಸಂಪಾದಿಸುತ್ತಾನೆ.  ಆದರೆ ಯಾರು ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಾರೋ ಅವರು ಮಾತ್ರ ಜೀವನದಲ್ಲಿ ಯಶಗಳಿಸಲು ಸಾಧ್ಯ,  ಯಾಕೆಂದರೆ ೨೪ ಗಂಟೆಗಳು ಪ್ರತಿಯೊಬ್ಬನ ಹತ್ತಿರವೂ ಇದೆ ಆದರೆ ಯಶಸ್ಸು ಮಾತ್ರ ಕೆಲವರ ಪಾಲಾಗಿದೆ, ಸೋಜಿಗವಲ್ಲವೆ? ಏಕೆಂದರೆ ಎಲ್ಲರಿಗೂ ಸಮಾನ ಸಮಯ ಆದರೆ ಯಶಸ್ಸಿನಲ್ಲಿ?  ಇಲ್ಲ ಇಲ್ಲಿ ವ್ಯತ್ಯಾಸವಿದೆ. ಸರಿ ನಾನು ಯಶ ಕಾಣದಿರಲು ನೂರು ಕಾರಣಗಳನ್ನು ಹೇಳಬಹುದು, ಕೆಟ್ಟ ವ್ಯವಸ್ಥೆಯನ್ನು ದೂರಬಹುದು, ಆದರೆ ಅದೇ ಕೆಟ್ಟ ವ್ಯವಸ್ಥೆಯಲ್ಲೇ ಬೆಳೆದು ಸಾಧಿಸಿದ ಅನೇಕ ಸಾಧಕರಿಲ್ಲವೇ? ಹೌದು ನಮ್ಮ ಸಾಧನೆಗೆ ತೊಡಕಾಗಿದ್ದು ನಮ್ಮ time management ನಲ್ಲಿರುವ ತೊಂದರೆಯೇ ಹೊರತು ಬೇರೊಂದಿಲ್ಲ. ಯೋಜನಾಬದ್ಧವಾಗಿ ಕಾರ್ಯನಿರ್ವಹಿಸದೇ ಇರುವ ಸಮಯವನ್ನು ಹಾಳು ಮಾಡಿಕೊಂಡು ವ್ಯವಸ್ಥೆಯನ್ನು ದೂರುವುದು ಎಷ್ಟು ಸರಿ? ನಾವು ಕೈಗೊಳ್ಳುವ ಪುಟ್ಟ ಕಾರ್ಯದಲ್ಲೂ ಸ್ಪಷ್ಟ ಕಲ್ಪನೆಯಿರಬೇಕು ಅದಕ್ಕಾಗಿ ಒಂದು ಸ್ಪಷ್ಟ ಯೋಜನೆ ಇದ್ದರೆ ಅಂದುಕೊಂಡ ಕಾಲದಲ್ಲಿ ಆ ಕಾರ್ಯವನ್ನು ಮಾಡಿ ಮುಗಿಸಬಹುದು ಅನ್ಯಥಾ ಇದು ಸಾಧ್ಯವಾಗದ ಮಾತು. Time and tide never waits for non ಅಲ್ವಾ, ಸಮಯೋಚಿತವಾಗಿ ಯೋಚಿಸುವವನು ಎಲ್ಲದರಲ್ಲಿಯೂ ಜಯಶಾಲಿಯಾಗುತ್ಯಾನೆ. ಹಗಲುಗನಸು ಕಾಣುತ್ತ ಆಕಾಶಗೋಪುರ ಕಟ್ಟುವವರ ಸಮಯ ನಿರರ್ಥಕ. ಆದರೆ ಆಶ್ಚರ್ಯ ನೋಡಿ "ಹಣ ಕಳೆದು ಹೋದರೆ ಬಾಯ್ಬಡಿದುಕೊಂಡು ಅಳುವವರನ್ನೇ ನಾವು ನೋಡಿದ್ದೇವೆ ಅಥವಾ ಸ್ವತಃ ನಾವೇ ಅತ್ತಿದ್ದೇವೆ. ಆದರೆ ಸಮಯ ಕಳೆದುಹೋಯಿತು ಅಯ್ಯೋ ಎಂದು ಅತ್ತವರನ್ನು ನಾನೆಲ್ಲಿ ಕಂಡಿಲ್ಲ". ಕಾಲಾಯ ತಸ್ಮೈಂನಮಹಃ. ಬಳಸಿಕೊಳ್ಳುವವನಿಗೆ ಸಮಯವೇ ಸಂಪತ್ತು . ಶುಭರಾತ್ರಿ

No comments:

Post a Comment

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23 :   ತರಗತಿ ಕನ್ನಡ ಇಂಗ್ಲೀಷ್ ಹಿಂದಿ ಗಣಿತ ವಿಜ್ಞಾನ ಸಮಾಜ ವಿಜ್ಞಾನ...